ಧಾರಾಕಾರ ಮಳೆ–ಗಾಳಿಯಿಂದ ಬೆಳೆ ನಾಶ- ಗಡಿಭಾಗದ ಹಳ್ಳಿಗಳಲ್ಲಿ ರೈತರ ಬದುಕು ಮತ್ತಷ್ಟು ಸಂಕಟಕ್ಕೆ.

ಅಥಣಿ/ಜತ್ತ, 8 ಆಗಸ್ಟ್: ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಯಿಂದ ನೂರಾರು ಎಕರೆಗಳಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹೊಲಗಳು ನೆಲಕ್ಕುರುಳಿವೆ. ಕೊಯ್ಯುವ ಹಂತದಲ್ಲಿದ್ದ ಬೆಳೆ ಹೊಲದಲ್ಲೇ ಹಾಳಾಗಿದ್ದರಿಂದ ರೈತರು ತೀವ್ರ ನಿರಾಶೆಗೆ ಒಳಗಾಗಿದ್ದಾರೆ.

ಹಾನಿಗೊಳಗಾದ ಹಳ್ಳಿಗಳು

ಅಥಣಿ ತಾಲೂಕಿನ ಕೋಹಳ್ಳಿ, ಅಡಹಳ್ಳಿ, ಬ್ಯಾಡರಟ್ಟಿ, ಬಳ್ಳಿಗೇರಿ, ಕಕಮರಿ, ರಾಮತೀರ್ಥ ಸೇರಿದಂತೆ ಅನೇಕ ಹಳ್ಳಿಗಳು ಹಾಗೂ ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂಧೂರ, ಬಸರಗಿ, ಗುಗವಾಡ, ಉಮರಾಣಿ ಗ್ರಾಮಗಳಲ್ಲಿ ಮಳೆ–ಗಾಳಿಯ ಪರಿಣಾಮ ತೀವ್ರವಾಗಿತ್ತು. ಬಿರುಗಾಳಿಯ ಹೊಡೆತಕ್ಕೆ ಸಸಿಗಳು ಬಿದ್ದುಹೋಗಿದ್ದು, ಕೊಂಬುಗಳು ಮುರಿದು ನೆಲಕ್ಕುರುಳಿವೆ.

ಬೆಳೆ ನಾಶದ ದೃಶ್ಯ
ಹೊಲದಲ್ಲಿ ನೀರು ನಿಂತ ಪರಿಣಾಮ ಬೇರು ಕುಟ್ಟುವ ಭೀತಿ

ಸಂಪೂರ್ಣ ಹಾಳಾಗುವ ಸಾಧ್ಯತೆ ಹೆಚ್ಚಳ

ರೈತರ ಹೂಡಿಕೆ ಹಾಗೂ ಶ್ರಮ ವ್ಯರ್ಥ

ರೈತರ ಕಣ್ಣೀರಿನ ಮಾತು

“ಸಾಲ ತೆಗೆದುಕೊಂಡು ಬೆಳೆದ ಬೆಳೆ ಈಗ ನೆಲಕ್ಕುರುಳಿದೆ. ಮುಂದಿನ ದಿನ ಹೇಗೆ ನಡೆಸುವುದು ಗೊತ್ತಿಲ್ಲ” ಎಂದು ಕೋಹಳ್ಳಿಯ ರೈತ ಬೇಸರ ವ್ಯಕ್ತಪಡಿಸಿದರು.
ಮತ್ತೊಬ್ಬರು, “ಬೆಳೆ ಹಾನಿಯಿಂದ ಸಾಲ ತೀರಿಸುವುದು ಅಸಾಧ್ಯ” ಎಂದು ಕಳವಳ ವ್ಯಕ್ತಪಡಿಸಿದರು.


ಸಹಾಯದ ನಿರೀಕ್ಷೆ

ನಷ್ಟದ ಭೀತಿಯಲ್ಲಿ ಮುಳುಗಿರುವ ರೈತರು ಈಗ ಸರ್ಕಾರ ಹಾಗೂ ಜನಪ್ರತಿನಿಧಿಗಳ ನೆರವಿಗಾಗಿ ಕಾಯುತ್ತಿದ್ದಾರೆ. ಸಮಯಕ್ಕೆ ಸರಿಯಾದ ಪರಿಹಾರ ಸಿಗದಿದ್ದರೆ ಮುಂದಿನ ಹಂಗಾಮಿಗೆ ದೊಡ್ಡ ಹೊಡೆತ ಬೀಳುವ ಭೀತಿ ವ್ಯಕ್ತವಾಗಿದೆ.

ವರದಿ ; ಲಕ್ಷ್ಮಣ ಮೂಕಿ,8618861316

UK FAST KANNADA NEWS 

Comments