Posts

ನಿಮ್ಮ ಸುತ್ತಮುತ್ತ ನಡೆಯಲಿರುವ ಸುದ್ದಿಗಳನ್ನು ನಮ್ಮ ವಾಟ್ಸಪ್ ನಂಬರ್ ಗೆ ಕಳುಹಿಸಿ;8618861316

ಬಿಸಿಲು, ಗಾಳಿ, ಮಳೆಗೂ ಜಗ್ಗದ ಬದುಕು…!ಇಂದು ಈ ಊರು… ನಾಳೆ ಮತ್ತೊಂದು ಊರು; ಕುರಿಗಳ ಹಿಂಡಿನೊಂದಿಗೆ ಊರೂರು ಅಲೆದಾಡುವ ಕುರಿಗಾಹಿಗಳ ಕುಟುಂಬ

ಒಂದು ಊರು ಇವರ ಶಾಶ್ವತ ನೆಲೆಯಲ್ಲ… ಒಂದು ಮನೆಯ ಗೋಡೆ ಇವರಿಗೆ ಆಸರೆಯಲ್ಲ… ಕುರಿಗಳ ಹಿಂಡಿನ ಹೆಜ್ಜೆಯೊಂದಿಗೆ ಊರೂರು ಅಲೆದಾಡುತ್ತಾ ಜೀವನ ಸಾಗಿಸುವ ಕುರಿಗಾಹಿಗಳ ಬದುಕು ನಿಜಕ್ಕೂ ಕಷ್ಟದ ಹಾದಿಯಾಗಿದೆ. ಇಂದು ಈ ಊರಿನಲ್ಲಿ ಬೀಡು ಬಿಟ್ಟರೆ, ನಾಳೆ ಕುರಿಗಳಿಗೆ ಮೇವು ಸಿಗುವ ಮತ್ತೊಂದು ಊರಿನತ್ತ ಹೆಜ್ಜೆ ಹಾಕಬೇಕು. ಬಿಸಿಲು, ಗಾಳಿ, ಮಳೆ, ಸಿಡಿಲು ಯಾವುದಕ್ಕೂ ಜಗ್ಗದೆ ಕರ್ನಾಟಕ–ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಅಲೆದಾಡುತ್ತಾ ಬದುಕು ಕಟ್ಟಿಕೊಳ್ಳುತ್ತಾರೆ. ಕುರಿಗಳಿಗೆ ಹಸಿರು ಮೇವು ಸಿಗುವ ಜಾಗವೇ ಇವರಿಗೆ ನೆಲೆ. ಬಯಲಿನಲ್ಲೇ ಚಿಕ್ಕದೊಂದು ಟೆಂಟ್ ಹಾಕಿಕೊಂಡು ಅದನ್ನೇ ಮನೆ ಮಾಡಿಕೊಂಡು ದಿನಗಳನ್ನು ಕಳೆಯುತ್ತಾರೆ. ಬೆಳಗಾಗುತ್ತಿದ್ದಂತೆ ಪುರುಷರು ಕುರಿಗಳ ಹಿಂಡನ್ನು ಕರೆದುಕೊಂಡು ಮೇವು ಹುಡುಕುತ್ತಾ ಹೊರಟರೆ, ಮಹಿಳೆಯರು ಕುಟುಂಬಕ್ಕೆ ಬೇಕಾದ ನೀರು ಮತ್ತು ಅಡುಗೆಗೆ ಬೇಕಾದ ಕಟ್ಟಿಗೆಗಾಗಿ ಸ್ಥಳೀಯರ ಬೋರ್‌ವೆಲ್, ಬಾವಿಗಳತ್ತ ಸಾಗುತ್ತಾರೆ. ತಲೆ ಮೇಲೆ ಉರಿಯುವ ಬಿಸಿಲಿರಲಿ, ಮೈಮೇಲೆ ಸುರಿಯುವ ಮಳೆಯಿರಲಿ, ಆಕಾಶದಲ್ಲಿ ಸಿಡಿಲು-ಗುಡುಗು ಅಬ್ಬರಿಸಲಿ… ತಾವು ಸಾಕಿದ ಕುರಿಗಳ ಹಿಂಡಿನ ಜವಾಬ್ದಾರಿಯನ್ನು ಹೊತ್ತು ದಿನವಿಡೀ ಅಲೆದಾಡುವುದೇ ಇವರ ಬದುಕು. ಸಂಜೆ ಮರಳಿದ ಬಳಿಕವೂ ವಿಶ್ರಾಂತಿ ಎಂಬುದು ಅಪರೂಪ. ಮೂರು ಕಲ್ಲುಗಳನ್ನು ಒಲೆ ಮಾಡಿಕೊಂಡು, ಅದರ ಮೇಲೆ ಪಾತ್ರೆ ಇಟ್ಟು ಅಡುಗೆ ಮಾಡಿ, ಮೇಣದಬತ್ತಿಯ ಮಂದ ಬೆಳಕಿನಲ್ಲಿ ...

ಬಂಗ್ಯಾನ ಖೋಡಿ ತೋಟ ಬಳ್ಳಿಗೇರಿ ಶಾಲೆಯಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯ ದಿನಾಚರಣೆ

ಜ್ಞಾನ ದೇಗುಲಕ್ಕೆ ಮಕ್ಕಳ ಸಂಭ್ರಮದ ಹೆಜ್ಜೆ: ಗುಲಾಬಿ ಹೂವಿನ ಸ್ವಾಗತದೊಂದಿಗೆ ಶಾಲಾ ಆರಂಭೋತ್ಸವ

24 ಎಕರೆ ಜಮೀನಿಗಾಗಿ ರಕ್ತದ ಹೊಳೆ! ಗೋವಿಂದಪುರದಲ್ಲಿ ಆಸ್ತಿ ವಿವಾದಕ್ಕೆ ಆರು ಜನರ ಬರ್ಬರ ಹತ್ಯೆ

ಗಾಯದ ಮೇಲೆ ಬರೆ ಎಳೆದ ರಸಗೊಬ್ಬರ ದರ ಏರಿಕೆ – ಸರ್ಕಾರ ವಿರುದ್ಧ ರೈತ ಸಂಘದ ಹೋರಾಟ

ಸಿಂಧೂರ ಗ್ರಾಮದಲ್ಲಿ ಕಳ್ಳರ ಭೀತಿ: ಗ್ರಾಮಸ್ಥರಿಗೆ ವಿಶೇಷ ಎಚ್ಚರಿಕೆ ಸೂಚನೆ

ಗೊಬ್ಬರ ಗೋಳಾಟದಿಂದ ಕಂಗಾಲಾದ ರೈತರು: ಅಥಣಿಯಲ್ಲಿ ಕ್ರಮಕ್ಕೆ ಆಗ್ರಹ

ಸಿಂಧೂರ ಗ್ರಾಮದಲ್ಲಿ ವೀರ ಸಿಂಧೂರ ಲಕ್ಷ್ಮಣ ಜಯಂತಿ ಸಂಭ್ರಮ