Posts

ನಿಮ್ಮ ಸುತ್ತಮುತ್ತ ನಡೆಯಲಿರುವ ಸುದ್ದಿಗಳನ್ನು ನಮ್ಮ ವಾಟ್ಸಪ್ ನಂಬರ್ ಗೆ ಕಳುಹಿಸಿ;8618861316

ಜ್ಞಾನ ದೇಗುಲಕ್ಕೆ ಮಕ್ಕಳ ಸಂಭ್ರಮದ ಹೆಜ್ಜೆ: ಗುಲಾಬಿ ಹೂವಿನ ಸ್ವಾಗತದೊಂದಿಗೆ ಶಾಲಾ ಆರಂಭೋತ್ಸವ

ಅಥಣಿ : ಜೂನ್ 1: 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕ-ಶಿಕ್ಷಕರ ಮಹಾಸಭೆಯನ್ನು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಬಂಗ್ಯಾನ ಖೋಡಿ ತೋಟ ಬಳ್ಳಿಗೇರಿ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕ ರಾಜ್ಯದಾದ್ಯಂತ ಶಾಲಾ-ಕಾಲೇಜುಗಳು ಇಂದಿನಿಂದ ಪುನರಾರಂಭಗೊಂಡ ಹಿನ್ನೆಲೆ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸುವ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸರ್ಕಾರಿ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಗಣ್ಯರು ತಿಳಿಸಿದರು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಗುಲಾಬಿ ಹೂ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಹೊಸ ಶೈಕ್ಷಣಿಕ ವರ್ಷದ ಆರಂಭವನ್ನು ವಿದ್ಯಾರ್ಥಿಗಳು ಉತ್ಸಾಹ ಹಾಗೂ ಸಂತೋಷದಿಂದ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಆರ್. ಪಾಟೀಲ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ಉತ್ತಮ ಶಿಕ್ಷಣದ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಮಹಾಂತೇಶ ಗುಡದಿನ್ನಿ, ವಿದ್ಯಾ ಕೋಲಿ, ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೋಷಕರು, ಗ್ರಾಮಸ್ಥರು ಹಾಗೂ ಹಿ...

24 ಎಕರೆ ಜಮೀನಿಗಾಗಿ ರಕ್ತದ ಹೊಳೆ! ಗೋವಿಂದಪುರದಲ್ಲಿ ಆಸ್ತಿ ವಿವಾದಕ್ಕೆ ಆರು ಜನರ ಬರ್ಬರ ಹತ್ಯೆ

ಗಾಯದ ಮೇಲೆ ಬರೆ ಎಳೆದ ರಸಗೊಬ್ಬರ ದರ ಏರಿಕೆ – ಸರ್ಕಾರ ವಿರುದ್ಧ ರೈತ ಸಂಘದ ಹೋರಾಟ

ಸಿಂಧೂರ ಗ್ರಾಮದಲ್ಲಿ ಕಳ್ಳರ ಭೀತಿ: ಗ್ರಾಮಸ್ಥರಿಗೆ ವಿಶೇಷ ಎಚ್ಚರಿಕೆ ಸೂಚನೆ

ಗೊಬ್ಬರ ಗೋಳಾಟದಿಂದ ಕಂಗಾಲಾದ ರೈತರು: ಅಥಣಿಯಲ್ಲಿ ಕ್ರಮಕ್ಕೆ ಆಗ್ರಹ

ಸಿಂಧೂರ ಗ್ರಾಮದಲ್ಲಿ ವೀರ ಸಿಂಧೂರ ಲಕ್ಷ್ಮಣ ಜಯಂತಿ ಸಂಭ್ರಮ